ಕೀರ್ತನೆ 62:1-12

  • ನಿಜ ರಕ್ಷಣೆ ದೇವರಿಂದಾನೇ

    • “ನಾನು ಮೌನವಾಗಿ ದೇವರಿಗಾಗಿ ಕಾಯ್ತೀನಿ” (1, 5)

    • ‘ಆತನ ಮುಂದೆ ಹೃದಯಗಳನ್ನ ತೋಡ್ಕೊಳ್ಳಿ’ (8)

    • ಮಾನವರು ಬರೀ ಉಸಿರು (9)

    • ಆಸ್ತಿಪಾಸ್ತಿಯಲ್ಲಿ ಭರವಸೆ ಬೇಡ (10)

ದಾವೀದನ ಮಧುರ ಗೀತೆ. ಗಾಯಕರ ನಿರ್ದೇಶಕನಿಗೆ ಸೂಚನೆ, ಯೆದುತೂನ್‌ ಶೈಲಿ.* 62  ನಾನು ಮೌನವಾಗಿದ್ದು ದೇವರಿಗಾಗಿ ಕಾಯ್ತೀನಿ. ಆತನಿಂದಾನೇ ನನಗೆ ರಕ್ಷಣೆ ಸಿಗುತ್ತೆ.+   ಆತನು ನನ್ನ ಬಂಡೆ, ನನ್ನ ರಕ್ಷಣೆ, ನನ್ನ ಸುರಕ್ಷಿತ ಆಶ್ರಯ,*+ಬಿದ್ದು ಹೋಗುವಷ್ಟು ನಾನು ಯಾವತ್ತೂ ಅಲ್ಲಾಡಲ್ಲ.+   ನೀವು ದ್ವೇಷಿಸೋ ಒಬ್ಬ ಮನುಷ್ಯನನ್ನ ಕೊಲ್ಲೋಕೆ ಎಲ್ಲಿ ತನಕ ಪ್ರಯತ್ನ ಮಾಡ್ತಾ ಇರ್ತಿರಾ?+ ವಾಲಿರೋ ಗೋಡೆ ತರ, ಇನ್ನೇನು ಕುಸಿದು ಬೀಳೋ ಕಲ್ಲಿನ ಗೋಡೆ ತರ ನೀವೆಲ್ಲ ಅಪಾಯಕಾರಿ.   ಅವನನ್ನ ಮೇಲಿಂದ ಕೆಳಗೆ ಬೀಳಿಸೋಕೆ ಅವರು ಒಟ್ಟಾಗಿ ಸೇರಿ ಯೋಚಿಸ್ತಿದ್ದಾರೆ,ಸುಳ್ಳು ಹೇಳೋದರಲ್ಲೇ ಅವ್ರಿಗೆ ಸಂತೋಷ. ಬಾಯಿಂದ ಆಶೀರ್ವಾದ ಮಾಡಿದ್ರೂ ಒಳಗೆ ಶಾಪ ಹಾಕ್ತಾ ಇರ್ತಾರೆ.+ (ಸೆಲಾ)   ನಾನು ಮೌನವಾಗಿದ್ದು ದೇವರಿಗಾಗಿ ಕಾಯ್ತೀನಿ.+ ಯಾಕಂದ್ರೆ ಆತನೇ ನನ್ನ ನಿರೀಕ್ಷೆಗೆ ಆಧಾರ.+   ಆತನು ನನ್ನ ಬಂಡೆ, ನನ್ನ ರಕ್ಷಣೆ, ನನ್ನ ಸುರಕ್ಷಿತ ಆಶ್ರಯ,ನಾನು ಯಾವತ್ತೂ ಕದಲಲ್ಲ.+   ನನ್ನ ರಕ್ಷಣೆ ಮತ್ತು ನನ್ನ ಗೌರವಕ್ಕೆ ದೇವರೇ ಆಧಾರ. ದೇವರೇ ನನ್ನ ಬಲವಾದ ಬಂಡೆ, ನನ್ನ ಆಶ್ರಯ.+   ಜನ್ರೇ, ಯಾವಾಗ್ಲೂ ಆತನ ಮೇಲೆ ಭರವಸೆ ಇಡಿ. ಆತನ ಮುಂದೆ ನಿಮ್ಮ ಮನಸ್ಸನ್ನ ತೋಡ್ಕೊಳ್ಳಿ.+ ದೇವರೇ ನಮಗೆ ಆಶ್ರಯ.+ (ಸೆಲಾ)   ಮನುಷ್ಯ ಬರೀ ಉಸಿರಷ್ಟೇ,ಅವರು ಮೋಸಗಾರರು.+ ಅವ್ರನ್ನೆಲ್ಲ ಒಂದು ತಕ್ಕಡಿಗೆ ಹಾಕಿ ತೂಗಿದ್ರೆ, ಅವ್ರ ಭಾರ ಒಂದು ಉಸಿರಿಗಿಂತ ಕಮ್ಮಿನೇ.+ 10  ಅನ್ಯಾಯದ ಸುಲಿಗೆ ಮೇಲೆ ಭರವಸೆ ಇಡಬೇಡಿ,ಕಳ್ಳತನದ ಮೇಲೆ ನಿರೀಕ್ಷೆ ಇಡಬೇಡಿ. ನಿಮ್ಮ ಸಿರಿಸಂಪತ್ತು ಜಾಸ್ತಿ ಇದ್ರೆ, ನಿಮ್ಮ ಹೃದಯನ ಅದ್ರ ಮೇಲಿಡಬೇಡಿ.+ 11  ಒಂದು ಸಲ ಅಲ್ಲ ಎರಡು ಸಲ ದೇವರು ಹೀಗೆ ಹೇಳೋದನ್ನ ನಾನು ಕೇಳಿಸ್ಕೊಂಡಿದ್ದೀನಿ ಬಲ ದೇವರಿಗೆ ಸೇರಿದ್ದು.+ 12  ಯೆಹೋವನೇ, ಶಾಶ್ವತ ಪ್ರೀತಿ ನಿಂದೇ,+ಯಾಕಂದ್ರೆ ನೀನು ಪ್ರತಿಯೊಬ್ಬನ ಕೆಲಸಗಳಿಗೆ ತಕ್ಕಂತೆ ಪ್ರತಿಫಲ ಕೊಡ್ತೀಯ.+

ಪಾದಟಿಪ್ಪಣಿ

ಅಥವಾ “ಎತ್ತರ ಸ್ಥಳ.”